ರಾಮದಾಸರ ನೆನಪು

2007 July 24
by aswal

(ಕಲಾಮಂದಿರದಲ್ಲಿ “ಪ್ರೊ. ರಾಮದಾಸರ ಒಂದು ನೆನಪು” ಕಾರ್ಯಕ್ರಮಕ್ಕೆ ಹೋದಾಗ ಸುರಿಯುತ್ತಿದ್ದ ಜಿಟಿ ಜಿಟಿ ಮಳೆ, ಆ ಮಳೆಯ ಮಧ್ಯೆಯೂ ಬಂದ ಜನಸಾಗರ … ಇದನ್ನೆಲ್ಲ ನೋಡಿ ಬರೆದ ಕವನ)

ಭಗವಂತ ಏನಿದು ಸೋನೆ?
ಮೇಘಕ್ಕೇನು ನೆಗಡೀನೆ!
ಗಗನಕ್ಕೆ ನಗದಂತೆ ಮಾಡಿದೆ ಸೋನೆಯಾ ಬೇನೆ.

ತುಂತುರು ಮಳೆ ಸಾಕಾಗಿದೆ,
ಭೂತಾಯಿಯ ಒಡಲು ತುಂಬಿದೆ.
ಮುತ್ತಿನ ನೀರು ಈ ರೀತಿ ಬೇಸರ ತರಬಾರದು.

ಗುಡುಗಿಲ್ಲ, ಮಿಂಚಿಲ್ಲ,
ಮೆಡಿಯುತಾವ ಹನಿಗಳೆಲ್ಲ ||
ತಡಬಡಿಸುತಾವ ಕಟಕಟನೆ ಹಲ್ಲುಗಳೆಲ್ಲ.

ಯಾವ ಕೆಲಸ ಕಾರ್ಯಗಳೂ ಇಲ್ಲ,
ಈ ವಸುಧೆಗೆ ಸೂರ್ಯನೂ ಇಲ್ಲ ||
ಯಾವ ಮಳೆಯ ಬಾಕಿಯೋ ಧರೆಯೊಳು ಮೆರೆಯುತಿಡೆಯಲ್ಲ.

ಕ್ರಾಂತಿ ಮಳೆ ಮೇಳೈಸಿಹುದಲ್ಲಾ,
ಚಿಂತೆ ಈಗ ಮೈದಳೆಯಿತಲ್ಲ ||
ಚಿಂತನೆಗೈಯಲು ರಾಮದಾಸರೆ ಇಲ್ಲವಲ್ಲ.

ಜಗದ ಬಾಳ ಬದಲಿಸಲೊರಟ ರಾಮದಾಸರೇ,
ಜಗದ ನೊಗವ ಹೊತ್ತ ಸುಂಡಗಳ
ಅನ್ಯಾಯದ ಬಂಡೆಗಳು ಬೆನ್ಡಾಗಲಿವೆ.
ಒಂದಲ್ಲಾ ಒಂದು ದಿನ ಕ್ರಾಂತಿಯಾ ಕಿಡಿಗಳೆಲ್ಲಾ,
ಕೆಂಡದಾ ಸೋನೆಯಾಗಿ ಎಡೆ ಬಿಡದೆ ಜಡಿಯಲಿವೆ.

(1-7-2007)

No comments yet

Leave a Reply

Note: You can use basic XHTML in your comments. Your email address will never be published.

Subscribe to this comment feed via RSS